ಕುದುರೆ ಏರಿಬರುವ
ಶೂರಧೀರ ನನ್ನವ
ಲೋಕಸುಂದರ ಚೆನ್ನ ಚೆನ್ನಿಗ
ತನ್ನ ತುಂಬಿಕೊಂಡ ಕಣ್ಣ
ಒಳಗೆ ಮತ್ಯಾರನೂ
ನೋಡ ಬಯಸದವನ
ಕೊರಳಿಗೆ ತನ್ನ ಮಾಲೆ
ಕನಸು ಕಂಡ ಮಾಧವಿ
ಏನಾಯ್ತೆ ಸಖಿ ನಿನ್ನ ವಿಧಿ
ಮಾರಾಟವಾಯ್ತೆ ಒಡಲು
ಅಷ್ಟಶತ ಶ್ವೇತ ಅಶ್ವಕೆ
ಹುಂಬ ಶಿಷ್ಯನ ಒಣ
ಪ್ರತಿಷ್ಠೆಯ ತೆವಲಿಗೆ
ಕುಚೋದ್ಯದ ಗುರುದಕ್ಷಿಣೆ
ಬಾಡಿಸಿತೇ ಇರುವಂತಿಕೆಯ,
ಮದುವೆ ಇಲ್ಲಾ, ಇಲ್ಲಾ
ತಾಳಿ ಕೊರಳಲಿ
ಹಯಕೆ ಬದಲು ಮಾಧವಿ
ಕೀರ್ತಿಗಾಗಿ ಹೆತ್ತಕುಡಿಯದಾನ
ರಾಜಕುವರಿಯ ಲಾವಣ್ಯಕೆ
ಮುದಿರಾಜನ ತಲ್ಲಣ
ಮೀಸಲು ಮುರಿವ ಔತಣ
ವರುಷಕ್ಕೊಬ್ಬ ಗಂಡ
ಅಲ್ಲ ಗಂಡು
ನಾಲ್ಕು ಹೆತ್ತರೂ ಮಡಿಲು ಬರಿದು
ಬಾಡಿಗಿಗಿದೆ ಒಡಲು
ತುಂಬಿಸಿ ಬೇಕಾದರೆ ಮಡಿಲು
ಬೇಕಾಗಿದೆ ಅಷ್ಟೆ ಶ್ವೇತಾಶ್ವ
ಯುಗ ಯುಗ ಕಳೆದರೂ
ಈ ಹೆಣ್ಣುಗಳು ಮಾಧವಿ, ದ್ರೌಪದಿ
ಸೀತೆ ಅಹಲ್ಯೆಯರೇ
*****
Related Post
ಸಣ್ಣ ಕತೆ
-
ಬಾಳ ಚಕ್ರ ನಿಲ್ಲಲಿಲ್ಲ
ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…
-
ಮನೆ “ಮಗಳು” ಗರ್ಭಿಣಿಯಾದಾಗ
ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…
-
ಸಾವು
ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…
-
ನಂಬಿಕೆ
ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…
-
ಕೆಂಪು ಲುಂಗಿ
ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…